ತೆರೆಯ ಮೇಲೂ ನಿರ್ದೇಶಕರಾಗಿ ಆನಂದ್ ಪಿ ರಾಜು
Posted date: 03 Wed, Aug 2016 – 08:51:13 AM

ಶ್ರೀ ಮೂವೀಸ್ ಸಂಸ್ಥೆಯಲ್ಲಿ, ಎನ್.ಎಸ್. ಶ್ರೀಧರ್ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ‘ಸಿನಿಮಾ ಎಂಬ ಮಾಯೆ’. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಆನಂದ್.ಪಿ. ರಾಜು ಅವರು ನಿರ್ದೇಶಕರಾಗಿಯೇ ಅಭಿನಯಿಸುತ್ತಿರುವುದು ವಿಶೇಷ. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ನಿರ್ದೇಶಕರಾಗಿ, ಇವತ್ತಿಗೂ ಕ್ಲಾಸ್ ಮತ್ತು ಮಾಸ್ ಸಿನಿಮಾಗಳನ್ನು ನಿರ್ದೇಶಿಸುತ್ತಾ ಬಂದಿರುವ ಆನಂದ್ ಪಿ. ರಾಜು ಕನ್ನಡ ಚಿತ್ರರಂಗದ ಮಟ್ಟಿಗೆ ಕ್ರಿಯಾಶೀಲ ನಿರ್ದೇಶಕ ಎನಿಸಿಕೊಂಡವರು. ಇಷ್ಟು ದಿನ ತೆರೆಯ ಹಿಂದೆ ಕೆಲಸ ಮಾಡುತ್ತಿದ್ದ ಆನಂದ್ ಪಿ. ರಾಜು ಈಗ ತೆರೆಮೇಲೂ ಬರಲು ಅಣಿಯಾಗಿದ್ದಾರೆ.
ಇತ್ತೀಚೆಗೆ ಸೋಮವಾರ ಪೇಟೆ ಬಳಿಯ ಅಬ್ಬೆ ಫಾಲ್ಸ್ ಹಾಗೂ ಮಾಧವಪುರದ ಬಳಿ ಸೂರಲಬ್ಬಿ ಫಾಲ್ಸ್ ಸುತ್ತ ಮುತ್ತ ಚಿತ್ರೀಕರಣ ನಡೆಸುವ ಮೂಲಕ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇನ್ನು ಉಳಿದ ಒಂದು ದಿನದ ಚಿತ್ರೀಕರಣ ಬಾಕಿಯಿದ್ದು, ಆ ದಿನ ಕನ್ನಡ ಚಿತ್ರರಂಗದ ಹೆಸರಾಂತ ನಟರೊಬ್ಬರು ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಉಳಿದಂತೆ ಹಾಡುಗಳ ಚಿತ್ರೀಕರಣ ಕೂಡಾ ಇದೇ ತಿಂಗಳಲ್ಲಿ ಆರಂಭವಾಗಲಿದೆ.
ಚಿತ್ರಕ್ಕೆ ಗೌರಿ ವೆಂಕಟೇಶ್ ಛಾಯಾಗ್ರಹಣ, ಸನ್ನಿ ಸಂಗೀತ, ಕೌರವ ವೆಂಕಟೇಶ್ ಸಾಹಸ, ಸಾಲೋಮನ್ ಸಂಕಲನ, ಸನ್ನಿ ಸಂಗೀತ, ಕವಿರಾಜ್ ಸಾಹಿತ್ಯ, ಹರಿ ನೃತ್ಯ ನಿರ್ದೇಶನ, ಹಾಲೇಶ್ ಚಿತ್ರದುರ್ಗ ಹಾಗೂ ಗೀತಾ ಪವಾರ್ ಸಹ ನಿರ್ಮಾಪಕರಾಗಿದ್ದಾರೆ. ಜೀವನ್ ಸಹನಿರ್ದೇಶನವಿದೆ. ಮಹೇಶ್, ಅಸ್ಮಾ, ಅನು, ಆನಂದ್ ಪಿ ರಾಜ್, ಎಂ.ಡಿ.ಕೌಶಿಕ್, ಅನು, ಧೃತಿ, ಮಿಮಿಕ್ರಿ ರಾಜಗೋಪಾಲ್, ಕೋಲಾರ ನಾಗೇಶ್ ಸೇರಿದಂತೆ ಇನ್ನು ಮುಂತಾದವರ ತಾರಾಗಣವಿದೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed